ಬೆಂಗಳೂರು ಗ್ರಾಮಾಂತರ ಲೋಕಸಭಾ ಲೆಕ್ಕಾಚಾರ: ಡಿ ಕೆ ಸುರೇಶ್​​ಗೆ ಸೋಲಿನ ಭಯ ಶುರು..!

ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಈಗ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಕಾವು ನಿಧಾನಕ್ಕೆ ಕಾವೇರುತ್ತಿದೆ. 

ಮುಂದಿನ ವರ್ಷದ ಏಪ್ರಿಲ್​-ಮೇ ವೇಳೆಗೆ ನಡೆಯಲಿರುವ ಲೋಕಸಭಾ ಕದನಕ್ಕೆ ಈಗಾಗಲೇ ಲೆಕ್ಕಾಚಾರ ಶುರುವಾಗಿದೆ.

ಇವೆಲ್ಲದರ ಮಧ್ಯೆ ಕರ್ನಾಟಕದಲ್ಲಿ ಕಾಂಗ್ರೆಸ್​ ಪ್ರಚಂಡ ಬಹುಮತದಿಂದ ಗೆದ್ದರೂ ಉಪ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರ ಸಹೋದರ ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್​ ಈಗ ಚುನಾವಣಾ ವೈರಾಗ್ಯದ ಮಾತುಗಳನ್ನಾಡುತ್ತಿರುವುದು ವಿಶೇಷ ಎನಿಸಿದೆ.

ವಿಧಾನಸಭಾ ಚುನಾವಣಾ ಲೆಕ್ಕಾಚಾರ:

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಇದರಲ್ಲಿ ತುಮಕೂರು ಜಿಲ್ಲೆಗೆ ಒಳಪಡುವ ಕುಣಿಗಲ್​, ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಬರುವ ಆನೇಕಲ್​, ಬೆಂಗಳೂರು ದಕ್ಷಿಣ ಮತ್ತು ರಾಜರಾಜೇಶ್ವರಿ ನಗರ ಹಾಗೂ ರಾಮನಗರ ಜಿಲ್ಲೆಯಲ್ಲಿ ಬರುವ ರಾಮನಗರ, ಮಾಗಡಿ, ಕನಕಪುರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳು ಸೇರಿವೆ.

ಮೂರು ಬಾರಿ ಸಂಸದ ಡಿ ಕೆ ಸುರೇಶ್​: 

2013ರಲ್ಲಿ ಉಪ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಸಂಸದರಾದ ಡಿ ಕೆ ಸುರೇಶ್​ ಅವರು 2014, 2019ರಲ್ಲೂ ಗೆದ್ದು ಸಂಸದರಾದರು. 2019ರಲ್ಲಿ ಕಾಂಗ್ರೆಸ್​ನಿಂದ ಗೆದ್ದಿದ್ದ ಏಕೈಕ ಸಂಸದ ಡಿ ಕೆ ಸುರೇಶ್​.

2019

ಪಕ್ಷ

ಅಭ್ಯರ್ಥಿ

ಮತಗಳು

ಕಾಂಗ್ರೆಸ್​

ಡಿ ಕೆ ಸುರೇಶ್​

8,78,258

ಬಿಜೆಪಿ

ಅಶ್ವತ್ಥ್​ ನಾರಾಯಣ

6,71,388

ಬಿಎಸ್​ಪಿ

ಡಾ ಚಿನ್ನಪ್ಪ 

19,972

ನೋಟಾ

ನೋಟಾ

12,454

ಗೆಲುವಿನ ಅಂತರ

2,06,870

2014

ಪಕ್ಷ

ಅಭ್ಯರ್ಥಿ

ಮತಗಳು

ಕಾಂಗ್ರೆಸ್​

ಡಿ ಕೆ ಸುರೇಶ್​

6,52,723

ಬಿಜೆಪಿ

ಮುನಿರಾಜು ಗೌಡ ಪಿ

4,21,243

ಜೆಡಿಎಸ್​

ಆರ್​ ಪ್ರಭಾಕರ್​ ರೆಡ್ಡಿ

3,17,870

ಬಿಎಸ್​ಪಿ

ಸಿ ತೋಪಯ್ಯ

11,594

ಗೆಲುವಿನ ಅಂತರ

2,31,480

ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್​, ಬಿಜೆಪಿ ಮತ್ತು ಜೆಡಿಎಸ್​ ಪಡೆದಿರುವ ಒಟ್ಟು ಮತಗಳೆಷ್ಟು..? ಎಂಬ ಲೆಕ್ಕಾಚಾರ ಇಲ್ಲಿದೆ.

ಕ್ಷೇತ್ರ

ಕಾಂಗ್ರೆಸ್​

ಜೆಡಿಎಸ್​

ಬಿಜೆಪಿ

ಕುಣಿಗಲ್​

58,697

53,097

44,476

ಆರ್ ಆರ್​ ನಗರ

67,877

10,269

1,25,990

ಬೆ. ದಕ್ಷಿಣ

1,46,521

24,612

1,96,220

ಆನೇಕಲ್​

1,34,797

6,415

1,03,472

ಮಾಗಡಿ

94,650

82,811

20,197

ರಾಮನಗರ

87,690

76,975

12,912

ಕನಕಪುರ

1,43,023

20,631

19,753

ಚನ್ನಪಟ್ಟಣ

1,53,374

96,592

80,671

ಒಟ್ಟು

8,86,629

3,71,042

6,03,691

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಮೈತ್ರಿ ಮಾಡಿಕೊಂಡಿದ್ದರಿಂದ ಜೆಡಿಎಸ್​​ನ ಮತಗಳು ವಿಭಜನೆಯಾಗಿ ಬಿಜೆಪಿಗೂ ಹೋಗಿದ್ದವು. 

ಸದ್ಯಕ್ಕೆ ವಿಧಾನಸಭಾ ಕ್ಷೇತ್ರವಾರು ಮೂರು ಪಕ್ಷಗಳು ಪಡೆದಿರುವ ಮತಗಳನ್ನು ಗಮನಿಸಿದರೆ ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರ ಸಹೋದರನಿಗೆ ಸೋಲಿಗೆ ಕಾರಣವಾದರೂ ಅಚ್ಚರಿಯೇನಿಲ್ಲ.