ವಾರದಲ್ಲಿ ಮೂರು ಬಾರಿಯಷ್ಟೇ ಬೆಂಗಳೂರು-ಮಂಗಳೂರು (Bengaluru – Mangaluru) ನಡುವೆ ಸಂಚರಿಸುತ್ತಿದ್ದ ವಿಶೇಷ ರೈಲು (Special Train) ಇನ್ನು ಮುಂದೆ ವಾರದಲ್ಲಿ ಆರು ದಿನ ಸಂಚರಿಸಲಿದೆ.
ಅಂದರೆ ವಾರದಲ್ಲಿ ಒಂದು ದಿನ ಬಿಟ್ಟು ಉಳಿದ ಆರು ದಿನ ವಿಶೇಷ ರೈಲು ಮಂಗಳೂರು-ಬೆಂಗಳೂರು, ಬೆಂಗಳೂರು-ಮಂಗಳೂರು ನಡುವೆ ಸಂಚರಿಸಲಿದೆ.
ಇದನ್ನೂ ಓದಿ: ಚಿರು ಸರ್ಜಾ, ಪುನೀತ್, ಸೋನಾಲಿ ಪೊಗಾಟ್ – ಭಾರತೀಯ ಯುವಕರಲ್ಲೇಕೆ ಹೃದಯಾಘಾತ ಹೆಚ್ಚು
06547/548 ಸಂಖ್ಯೆಯ ರೈಲನ್ನು ವಾರದ ಆರು ದಿನಕ್ಕೂ ವಿಸ್ತರಿಸುವ ಬಗ್ಗೆ ನೈರುತ್ಯ ರೈಲ್ವೆ ವಲಯ ಸಲ್ಲಿಸಿದ್ದ ಪ್ರಸ್ತಾವನೆಯನ್ನು ರೈಲ್ವೆ ಸಚಿವಾಲಯ ಒಪ್ಪಿಕೊಂಡಿದೆ.
ಬೆಂಗಳೂರಿನ ಹೊರಡುವ ರೈಲಿನ ಈಗಿನ ಕೆಎಸ್ಆರ್ ಬೆಂಗಳೂರು ಟರ್ಮಿನಲ್ನಿಂದ ಬೈಯಪ್ಪನಹಳ್ಳಿಗೆ ಶಿಫ್ಟ್ ಮಾಡಲಾಗಿದೆ. ಈ ರೈಲು ಬೈಯಪ್ಪನಹಳ್ಳಿ, ಕಂಟೋನ್ಮೆಂಟ್, ಕೆಂಗೇರಿ ಮಾರ್ಗವಾಗಿ ಸಂಚರಿಸಲಿದೆ.
ಶೀಘ್ರದಲ್ಲೇ ಆರು ದಿನ ಸಂಚಾರ ಆರಂಭದ ದಿನಾಂಕವನ್ನು ರೈಲ್ವೆ ಸಚಿವಾಲಯ ಪ್ರಕಟಿಸಲಿದೆ.