Bengaluru Double Murder: ಸುಳ್ಳು ಸುದ್ದಿ ಹಬ್ಬಿಸಿದ BJP, ಹಿಂದೂ ಸಂಘಟನೆ

ಬೆಂಗಳೂರಲ್ಲಿ ನಡೆದ ಇಬ್ಬರು ಉದ್ಯಮಿಗಳ ಸಂಬಂಧ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ಸುಳ್ಳು ಸುದ್ದಿ ಹಬ್ಬಿಸಿವೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಆಂಧ್ರ ಸಹ ಉಸ್ತುವಾರಿ ಸುನಿಲ್​ ದಿಯೋಧರ್​ ಅವರು ಬೆಂಗಳೂರಲ್ಲಿ ಹಿಂದೂ ಶ್ರೀಗಳ ಹತ್ಯೆಯಾಗಿದೆ ಎಂದು ಟ್ವೀಟಿಸಿ ಸುಳ್ಳು ಹಬ್ಬಿಸಿದ್ದಾರೆ. ಟಿಪ್ಪೂ ಸುಲ್ತಾನ್​ ಸಿದ್ಧಾಂತಿಗಳಿಂದ ಕರ್ನಾಟಕದಲ್ಲಿ ಅಪಾಯಕಾರಿ ಸ್ಥಿತಿ ಇದೆ, ಎಲ್ಲರೂ ಪ್ರತಿಭಟಿಸಬೇಕು ಎಂದು ಟ್ವೀಟಿಸಿದ್ದಾರೆ.

ಕರ್ನಾಟಕ ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಮೋಹನ್​ ಗೌಡ ಬೆಂಗಳೂರಲ್ಲಿ ಹಿಂದೂ ನಾಯಕನ ಕಗ್ಗೊಲೆ ಆಗಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಇಂದೂ ಮಕ್ಕಳ್​ ಕಚ್ಚಿ ಮತ್ತು ಅಮಿತಾಭ್​ ಚೌಧರಿ ಎಂಬ ಟ್ವಿಟ್ಟರ್​ ಹ್ಯಾಂಡಲ್​ನಲ್ಲೂ ಹಿಂದೂ ನಾಯಕನ ಹತ್ಯೆಯಾಗಿದೆ ಎಂದು ಟ್ವೀಟಿಸಿ ಪ್ರಚೋದಿಸಲಾಗಿದೆ.

ಕಗ್ಗೊಲೆಗೆ ಕಾರಣ ಏನು..?

ಫೈಬರ್​ನೆಟ್​ ಉದ್ಯಮದಲ್ಲಿ ದ್ವೇಷದಿಂದಾಗಿ ಬೆಂಗಳೂರಲ್ಲಿ ನಡೆದಿದ್ದ ಖಾಸಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಸುಬ್ರಹ್ಮಣ್ಯ ಮತ್ತು ಸಿಇಒ ವಿನು ಕುಮಾರ್​ ಹತ್ಯೆ ಮಾಡಲಾಗಿದೆ.

ಕೊಲೆ ಆರೋಪಿಗಳಾದ ಶಬರೀಶ್​ ಅಲಿಯಾಸ್​ ಫ್ಲೆಕ್ಸ್​ ಸಂತೋಷ್​ ಮತ್ತು ವಿನಯ್​ ರೆಡ್ಡಿಯನ್ನು ಬಂಧಿಸಲಾಗಿದೆ.

ಬೆಂಗಳೂರಿನ ಹೆಬ್ಬಾಳ-ಕೆಂಪಾಪುರದಲ್ಲಿ ಏರಾನಿಕ್ಸ್​ ಮೀಡಿಯಾ ಪ್ರೈವೇಟ್​ ಲಿಮಿಟೆಡ್​ನನ್ನು ಫಣೀಂದ್ರ ಮತ್ತು ವಿನು ಕುಮಾರ್​ ನವೆಂಬರ್​ 2022ರಲ್ಲಿ ಸ್ಥಾಪನೆ ಮಾಡಿದ್ದರು.

ಇವರು ತಮ್ಮ ಕಂಪನಿಗೆ ಎದುರಾಳಿ ಕಂಪನಿ ಜಿನೆಟ್​ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 20 ಮಂದಿ ಇಂಜಿನಿಯರ್​ ಮತ್ತು ಇತರೆ ಸಿಬ್ಬಂದಿಯನ್ನೇ ನೇಮಕ ಮಾಡಿಕೊಂಡಿದ್ದರು.

ಅಲ್ಲದೇ ಕೇವಲ 299 ರೂಪಾಯಿ 100mbps ವೇಗದ ಬ್ರಾಂಡ್​ಬ್ಯಾಂಡ್​ ಇಂಟರ್​ನೆಟ್​ ಸೌಲಭ್ಯ ನೀಡುತ್ತಿದ್ದರು. ಜಿನೆಟ್​ 499 ರೂಪಾಯಿಗೆ ಇಂಟರ್​ನೆಟ್​ ಸೌಲಭ್ಯ ನೀಡ್ತಿತ್ತು.

ಒಂದು ಕಡೆ ತಮ್ಮದೇ ಕಂಪನಿಯ ಸಿಬ್ಬಂದಿಯನ್ನು ಸೆಳೆದಿದ್ದು ಮತ್ತು ತಮಗಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ಇಂಟರ್​ನೆಟ್​ ನೀಡುತ್ತಿದ್ದ ಕಾರಣ ತಮ್ಮ ಉದ್ಯಮಕ್ಕೆ ಹಿನ್ನಡೆ ಆಗಿದೆ ಎಂದು ಕುಪಿತಗೊಂಡು ಫಣೀಂದ್ರ ಮತ್ತು ವಿನು ಕುಮಾರ್​ ಕೊಲೆ ಮಾಡಲಾಗಿದೆ.

ಬಂಧಿತ ಫ್ಲೆಕ್ಸ್​ ಅಲಿಯಾಸ್​ ಶಬರೀಶ್​ ಈ ಹಿಂದೆ ಜಿನೆಟ್​ನಲ್ಲಿ ಕೆಲಸ ಮಾಡುತ್ತಿದ್ದ.

LEAVE A REPLY

Please enter your comment!
Please enter your name here