ADVERTISEMENT
ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರ ಕೈಗೊಂಡ ಪ್ರಮುಖ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯಲ್ಲಿ ರಾಜಧಾನಿ ಬೆಂಗಳೂರಲ್ಲಿ ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ್ದ ಐವರನ್ನು ಬಂಧಿಸಲಾಗಿದೆ.
ಈ ಮೂಲಕ ರಾಜಧಾನಿಯಲ್ಲಿ ಭಾರೀ ವಿಧ್ವಂಸಕ ಕೃತ್ಯವನ್ನು ಪೊಲೀಸರು ತಪ್ಪಿಸಿದ್ದಾರೆ.
ಸೈಯದ್ ಸುಹೇಲ್, ಉಮರ್, ಜನೈದ್, ಮುದಾಸಿರ್ ಮತ್ತು ಜಹೀದ್ನನ್ನು ಬೆಂಗಳೂರು ನಗರದ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಶಂಕಿತ ಉಗ್ರ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಮಾಹಿತಿ ನೀಡಿದ್ದಾರೆ.
ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಈ ಐವರು ಶಂಕಿತ ಉಗ್ರರು ಬೆಂಗಳೂರಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ಹೆಣೆದಿದ್ದರು.
2017ರಲ್ಲಿ ಆರ್ ಟಿ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಆರೋಪಿಗಳಿಗೆ 2008ರ ಸರಣಿ ಬಾಂಬ್ ಸ್ಫೋಟದ ಆರೋಪಿಯಾಗಿದ್ದ ಟಿ ನಜೀರ್ನ್ನ ಸಂಪರ್ಕವಾಗಿತ್ತು. ಈತ ಈ ಐವರು ಆರೋಪಿಗಳಿಗೆ ಭಯೋತ್ಪಾದಕ ಕೃತ್ಯಕ್ಕೆ ಪ್ರಚೋದಿಸಿದ್ದ.
ಬಂಧಿತರಿಂದ 4 ವಾಕಿಟಾಕಿಗಳು, 7 ನಾಡ ಬಂದೂಕುಗಳನ್ನು, 42 ಜೀವಂತ ಗುಂಡುಗಳು, 2 ಡ್ರ್ಯಾಗರ್ಗಳು, 2 ಸ್ಯಾಟ್ಲೈಟ್ ಫೋನ್ಗಳು ಮತ್ತು 4 ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿದೇಶಕ್ಕೆ ಓಡಿಹೋಗಿರುವ ಆರನೇ ಆರೋಪಿಯೇ ಬಾಂಬ್ ಸ್ಫೋಟದ ಪಿತೂರಿ ಹೆಣೆದಿದ್ದ ಮತ್ತು ಆತನೇ ಈ ಐವರು ಆರೋಪಿಗಳಿಗೆ ಸಾಮಗ್ರಿಗಳನ್ನು ಪೂರೈಸಿದಿದ್ದ.
ADVERTISEMENT