ಬಾಗಲಕೋಟೆಯ (Bagalakote) ಮುಧೋಳದಲ್ಲಿ ಶನಿವಾರ ರಾತ್ರಿ ಮುಸ್ಲಿಂ ಯುವಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಮುಧೋಳದ ಮಹಿಬೂಬ್ ಭಗ್ವಾನ್ (22) ಹತ್ಯೆಯಾದ ಯುವಕ.
ಹತ್ಯೆಗೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆಯ ಸದಸ್ಯರೆನ್ನಲಾದ ಭದ್ರೇಶ್ ಮೋಹಿತ್ ಮತ್ತು ಇತರರನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ವೈಯಕ್ತಿಕ ವೈಷ್ಯಮ್ಯ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬಾಗಲಕೋಟೆ (Bagalkote) ಹಾಗೂ ಮುಧೋಳದ ಹಲವೆಡೆಗಳಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ನಡೆಯಲಿರುವ ಕಾರಣ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಇದನ್ನೂ ಓದಿ : ಕಲಬುರ್ಗಿ : ಮುಸ್ಲಿಂ ಯುವತಿಯೊಂದಿಗೆ ಪ್ರೀತಿ : ಹಿಂದೂ ಯುವಕನ ಬರ್ಬರ ಹತ್ಯೆ