ಹಿರಿಯ ವಕೀಲ ಸಿ ವಿ ನಾಗೇಶ್​ ಅವರ ಪುತ್ರ ಸಾವು

ಹಿರಿಯ ವಕೀಲ ಸಿ ವಿ ನಾಗೇಶ್ ಪುತ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

41 ವರ್ಷದ ಅರುಣ್​ ನಾಗೇಶ್​ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ತಮಿಳುನಾಡಿನ ಊಟಿಗೆ ತಮ್ಮ ಕುಟುಂಬ ಸಮೇತ ಅರುಣ್​ ನಾಗೇಶ್​ ಅವರು ತೆರಳಿದ್ದರು. ಈ ವೇಳೆ ರಕ್ತದೊತ್ತಡ ಕುಸಿತದಿಂದ ಅಲ್ಲಿಯೇ ಕುಸಿದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತ್ತಾದರೂ ಮಾರ್ಗಮಧ್ಯೆಯೇ ಜೀವ ಬಿಟ್ಟಿದ್ದಾರೆ.

ಅರುಣ್​ ನಾಗೇಶ್​ ಅವರ ಮೃತದೇಹವನ್ನು ಬೆಂಗಳೂರಿಗೆ ಕರೆತರಲಾಗುತ್ತಿದ್ದು, ಮಧ್ಯಾಹ್ನ 2 ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ.