ಅಭಿಷೇಕ್​ ಅಂಬರೀಶ್​-ಅವಿವಾ ಮದುವೆ – ಸಿಎಂ ಸಿದ್ದರಾಮಯ್ಯ ಶುಭಹಾರೈಕೆ – ಸಿದ್ದರಾಮಯ್ಯಗೆ ಜೈಕಾರ -Photos

ರೆಬೆಲ್​ ಸ್ಟಾರ್​ ಅಂಬರೀಶ್​ ಮತ್ತು ಸುಮಲತಾ ಅಂಬರೀಶ್​ ಅವರ ಪುತ್ರ ಅಭಿಷೇಕ್​ ಅಂಬರೀಶ್​ ಮತ್ತು ಅವಿವಾ ಬಿದ್ದಪ್ಪ ದಂಪತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭಹಾರೈಸಿದ್ದಾರೆ.
ಇವತ್ತು ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ನವದಂಪತಿಗೆ ಶುಭ ಹಾರೈಸಿದರು.

ಸಿಎಂ ಸಿದ್ದರಾಮಯ್ಯ ಅವರಿಗೆ ವಸತಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಮೀರ್​ ಅಹ್ಮದ್​ ಖಾನ್​ ಜೊತೆಗಿದ್ದರು.

ಬಳಿಕ ಫುಡ್​ಕೋರ್ಟ್​ನಲ್ಲಿ ಸ್ನ್ಯಾಕ್ಸ್​ ಸೇವಿಸುವ ವೇಳೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಸಿದ್ದರಾಮಯ್ಯ ಅವರಿಗೆ ಮುಖಾಮುಖಿಯಾಗಿ ಇಬ್ಬರೂ ನಾಯಕರು ಕುಶಲೋಪರಿ ವಿಚಾರಿಸಿಕೊಂಡರು.

ಮದುವೆ ಮಂಟಪಕ್ಕೆ ಬರುತ್ತಿದ್ದಂತೆ ಸಿದ್ದರಾಮಯ್ಯ ಪರ ಘೋಷಣೆಗಳು ಕೇಳಿಬಂದವು. ಬಳಿಕ ತಮ್ಮ ಅಭಿಮಾನಿಗಳತ್ತ ಸಿದ್ದರಾಮಯ್ಯ ಅವರು ಕೈ ಬೀಸಿದರು.