ಪತ್ನಿ ಆತ್ಮಹತ್ಯೆಗ ಆರಣಾದ ಬೆನ್ನಲ್ಲೇ, ಅರಣ್ಯ ರಕ್ಷಕ ಅಧಿಕಾರಿಯಾಗಿದ್ದ ಪತಿಯೂ ನೇಣಿಗೆ ಶರಣಾಗಿರುವ ದಾರುಣ ಘಟನೆ ಕೋಲಾರ ಜಿಲ್ಲೆಯ ಬಿರುನಾಣಿಯಲ್ಲಿ ನಡೆದಿದೆ.
ಶಿವಮೊಗ್ಗ ಮೂಲದ ಯುವರಾಜ್ ಬಿರುನಾಣಿಯಲ್ಲಿ ಅರಣ್ಯ ಇಲಾಖೆಯ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಹತ್ತು ತಿಂಗಳ ಹಿಂದೆಯಷ್ಟೇ ಶಿಲ್ಪಾ (22) ಹಾಗೂ ಯುವರಾಜ್ (25) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಇಬ್ಬರೂ ನೇಣಿಗೆ ಶರಣಾಗಿದ್ದಾರೆ.
ಶ್ರೀಮಂಗಳ ವನ್ಯಜೀವಿ ನಾಗಮಂಗಲ ವಿಣಾಗದ ವ್ಯಾಪ್ತಿಯ ಬಿರುನಾಣಿಯಲ್ಲಿ ಯುವರಾಜ್ ಫಾರೆಸ್ಟ್ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ.
ಭಾನುವಾರ ಸಂಜಿ ಕರ್ತವ್ಯ ಮುಗಿಸಿ ಯುವರಾಜ್ ಮನೆಗೆ ಬಂದಾಗ ಪತ್ನಿ ಶಿಲ್ಪಾ ಬಾತ್ ರೂಮ್ನಲ್ಲಿ ತನ್ನ ವೇಲ್ನಿಂದ ಆತ್ಮಹತ್ಯೆಗೆ ಶರಣಾಗಿದ್ದಳು ಎನ್ನಲಾಗಿದೆ. ಇದನ್ನ ನೋಡಿದ ಯುವರಾಜ್ ಮನೆ ಮಾಲೀಕನನ್ನು ಕರೆದು ಮೃತದೇಹವನ್ನು ಕೆಳಗಡೆ ಇಳಿಸಿದ್ದಾರೆ. ಈ ವಿಷಯವನ್ನು ಸಂಬಂಧಿಕರಿಗೆ ತಿಳಿಸಿದ್ದ ಯುವರಾಜ್ ಸ್ವಲಪ್ ಸಮಯದಲ್ಲಿಯೇ ಪತ್ನಿ ನೇಣುಬಿಗಿದುಕೊಂಡಿದ್ದ ವೇಲ್ನಿಂದ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.