ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರ ನಟನೆಯ ಬಹುನಿರೀಕ್ಷಿತ ಮುಗೀಲ್ ಪೇಟೆ ಚಿತ್ರ ಶೂಟಿಂಗ್ ಮುಕ್ತಾಯಗೊಂಡು ಬಿಡುಗಡೆಗೆ ಸಿದ್ದವಾಗಿದೆ. ಇಂದು ಯುಗಾದಿ ಹಬ್ಬದಂದು ‘ಮುಗಿಲ್ ಪೇಟೆ’ ಚಿತ್ರದ ಎರಡನೇ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಮುಗಿಲ್ ಪೇಟೆ ಚಿತ್ರವು ಕಾಲೇಜು ಲವ್ ಸ್ಟೋರಿ ಚಿತ್ರವಾಗಿದ್ದರೂ ಸಹ ಮನೆ ಹಾಗೂ ತಂದೆ-ತಾಯಿಯ ಪ್ರೀತಿ, ನಂಬಿಕೆಯ ಬಗ್ಗೆ ಕತೆಯನ್ನು ಒಳಗೊಂಡಿರುವಂತಹ ಅಂಶಗಳು ಈ ಟೀಸರ್ನಲ್ಲಿ ಕಂಡುಬರುತ್ತವೆ. ಇನ್ನು ಹಾಸ್ಯಪಾತ್ರದಲ್ಲಿ ಸಾಧುಕೋಕಿಲ ಮತ್ತು ರಂಗಾಯಣ ರಘು ನಟಿಸಿದ್ದಾರೆ. ಇವರ ಹಾಸ್ಯದ ಬಗ್ಗೆ ಹೇಳಲೇಬೇಕಿಲ್ಲ.
ಮುಗಿಲ್ ಪೇಟೆ ಚಿತ್ರದ ನಾಯಕ ನಟನಾಗಿ ರವಿಚಂದ್ರನ್ ಅವರ ಪುತ್ರ ಮನುರಂಜನ್ ಅವರು ನಾಯಕ ನಟನಾಗಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ನಾಯಕಿಯಾಗಿ ಕಾಯಡು ಲೋಹರ್ ಅವರು ಸಹ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಇವರ ಜೊತೆಗೆ ಪೋಷಕ ಪಾತ್ರದಲ್ಲಿ ತಾರಾ ಅನುರಾಧ, ಅಪ್ಪಣ್ಣ ಹಾಗೂ ಪ್ರಶಾಂತ್ ಸಿದ್ದಿ ಅವರು ನಟಿಸುತ್ತಿದ್ದಾರೆ.
ಮುಗಿಲ್ ಪೇಟೆ ಚಿತ್ರವನ್ನು ರಾಕೇಶ್ ವಿಜಯಕುಮಾರ ಅವರು ಮೋತಿ ಮೂವಿ ಬ್ಯಾನರ್ನಲ್ಲಿ ನಿರ್ಮಿಸುತ್ತಿದ್ದಾರೆ. ಭರತ್ ಎಸ್ ನವುಂಡ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಶ್ರೀಧರ್ ಎಂ ಸಂಭ್ರಮ್ ಅವರು ಸಂಗೀತ ನೀಡಿದ್ದಾರೆ.
ಕನ್ನಡ ಒಳಗೊಂಡಂತೆ ಬಹುಭಾಷೆಗಳ ಸಿನಿಮಾದಲ್ಲಿ ಹಿನ್ನೆಲೆ ಗಾಯನ ಮೂಲಕ ಮನೆಮಾತಾಗಿದ್ದ ಖ್ಯಾತ ಗಾಯಕಿ ವಾಣಿ ಜಯರಾಂ ಇನ್ನಿಲ್ಲ.
78 ವರ್ಷದ ಅವರು ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದೇ ವರ್ಷ ಇವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ...
ಸೌದಿ ಅರೇಬಿಯಾದಲ್ಲಿ ಒಂಟೆಗೆ ಕಾರು ಡಿಕ್ಕಿ ಆಗಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸಾವನ್ನಪ್ಪಿದ್ದಾರೆ.
ಸೌದಿ ಅರೇಬಿಯಾದ ರಿಯಾದ್ ಪ್ರಾಂತ್ಯದ ಖುರೈಸ್ನಲ್ಲಿ ರಸ್ತೆ ದಾಟುತ್ತಿದ್ದ ಒಂಟೆಗೆ ಕಾರು ಡಿಕ್ಕಿ ಆಗಿದೆ.
ಕಾರಿನಲ್ಲಿದ್ದ ಹಳೆಯಂಗಡಿ ಬಳಿಯ ಕದಿಕೆ...
ನಟಿ ಸನ್ನಿ ಲಿಯೋನ್ ಭಾಗವಹಿಸಬೇಕಿದ್ದ ಫ್ಯಾಷನ್ ಶೋ ಸ್ಥಳದಲ್ಲಿ ಬಾಂಬ್ ಸ್ಫೋಟವಾಗಿದೆ.
ಮಣಿಪುರ ರಾಜ್ಯದ ರಾಜಧಾನಿ ಇಂಫಾಲದಲ್ಲಿ ಇವತ್ತು ಸನ್ನಿ ಲಿಯೋನ್ ಫ್ಯಾಷನ್ ಶೋ ಆಯೋಜನೆ ಆಗಿತ್ತು.
ಕಾರ್ಯಕ್ರಮ ಸ್ಥಳದಲ್ಲಿ ಇವತ್ತು ಬೆಳಗ್ಗೆ ಬಾಂಬ್ ಸ್ಫೋಟವಾಗಿದೆ.
ಆದರೆ...
ಒಂದೆಡೆ ಅಮೆರಿಕದ ಹಿಂಡೆನ್ಬರ್ಗ್ ವರದಿಯ ಕಾರಣದಿಂದ ದೈತ್ಯ ಉದ್ಯಮಿ ಗೌತಮ್ ಅದಾನಿ ಕಂಪನಿಯ ಷೇರುಗಳು ಪಾತಾಳಕ್ಕೆ ಕುಸಿದು ಷೇರುದಾರರಿಗೆ 9 ಲಕ್ಷ ಕೋಟಿ ರೂಪಾಯಿ ನಷ್ಟ ಆದ ನಡುವೆಯೇ ಇತ್ತ ಯೋಗ ಬಾಬಾರಾಮ್ದೇವ್...
ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರಿಗೆ ಬಿಜೆಪಿ ಕರ್ನಾಟಕದಲ್ಲಿ ಚುನಾವಣಾ ಜವಾಬ್ದಾರಿಯನ್ನು ನೀಡಿದೆ.
ಚುನಾವಣಾ ಉಸ್ತುವಾರಿ ಮತ್ತು ಸಹ...
ಫೆಬ್ರವರಿ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಆಯವ್ಯಯ ಮಂಡನೆ ಬಳಿಕ ಬಿಜೆಪಿಯಲ್ಲಿ ದೊಡ್ಡ ಪಕ್ಷಾಂತರ ಪರ್ವ ಆಗಬಹುದು ಎಂದು ಮೂಲಗಳು ತಿಳಿಸಿವೆ.
ಐವರು ಬಿಜೆಪಿ ಶಾಸಕರು ಮತ್ತು ಇಬ್ಬರು ವಿಧಾನಪರಿಷತ್...
ರಾಜಧಾನಿ ಬೆಂಗಳೂರಲ್ಲಿ ಕಳೆದ ಮೂರು ವರ್ಷಗಳಲ್ಲಿ ಕೇವಲ ಗುಂಡಿಗಳನ್ನು ಮುಚ್ಚಲೆಂದೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖರ್ಚು ಮಾಡಿದ್ದೆಷ್ಟು ಗೊತ್ತಾ..? ಬರೋಬ್ಬರೀ 7 ಸಾವಿರ ಕೋಟಿ ರೂಪಾಯಿಗಿಂತಲೂ ಅಧಿಕ.
2019-20, 2020-21, 2021-2022 ಈ...
ಖಾಸಗಿ ಪಾಲುದಾರಿಕೆಯ ಟೆಲಿಕಾಂ ಕಂಪನಿ ವೋಡಾಫೋನ್ಐಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜೀವದಾನ ನೀಡಿದೆ.
ಕೇಂದ್ರ ಸರ್ಕಾರಕ್ಕೆ ವೋಡಾಫೋನ್ಐಡಿಯಾ ನೀಡಬೇಕಿದ್ದ 16,133 ಕೋಟಿ ರೂಪಾಯಿ ಮೊತ್ತವನ್ನು ಈಗ ಷೇರುಗಳಾಗಿ ಪರಿವರ್ತಿಸಿ ಹಂಚಿಕೆ ಮಾಡುವಂತೆ ಪ್ರಧಾನಿ...
ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಮೂಲಕ ಸರ್ಕಾರಿ ನೌಕರರಿಗೆ ಬಿಜೆಪಿ ಆಘಾತ ನೀಡಿದೆ.
ಫೆಬ್ರವರಿ 1ರಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಜೆಟ್ ಮಂಡಿಸಿದ ಬಳಿಕ...