ಜೂನ್ 26ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಹೊಸ ಐದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ.
ಈ ಐದು ರೈಲುಗಳ ಪೈಕಿ ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಕೂಡಾ ಒಂದು. ಈ ಮೂಲಕ ಕರ್ನಾಟಕಕ್ಕೆ ಬೆಂಗಳೂರು-ಚೆನ್ನೈ ಬಳಿಕ ಎರಡನೇ ವಂದೇ ಭಾರತ್ ರೈಲು ಸಿಗಲಿದೆ.
ವೇಳಾಪಟ್ಟಿ:
ಬೆಂಗಳೂರಿನಿಂದ ಬೆಳಗ್ಗೆ 5.45ಕ್ಕೆ ಹೊರಡುವ ವಂದೇ ಭಾರತ್ ರೈಲು ದಾವಣಗೆರೆಗೆ ಬೆಳಗ್ಗೆ 9 ಗಂಟೆ 55 ನಿಮಿಷಕ್ಕೆ ತಲುಪಿ ಹುಬ್ಬಳ್ಳಿಗೆ ಮಧ್ಯಾಹ್ನ 12.10 ನಿಮಿಷಕ್ಕೆ ಮತ್ತು ಧಾರವಾಡಕ್ಕೆ 12 ಗಂಟೆ 40 ನಿಮಿಷಕ್ಕೆ ತಲುಪುತ್ತದೆ.
ಧಾರವಾಡದಿಂದ ಮಧ್ಯಾಹ್ನ 1.15 ಗಂಟೆಗೆ ಹೊರಡುವ ವಂದೇ ಭಾರತ್ ದಾವಣಗೆರೆ ಮಧ್ಯಾಹ್ನ 3 ಗಂಟೆ 48 ನಿಮಿಷಕ್ಕೆ ತಲುಪಿ ಅಲ್ಲಿಂದ ಬೆಂಗಳೂರಿಗೆ ರಾತ್ರಿ 8 ಗಂಟೆ 10 ನಿಮಿಷಕ್ಕೆ ತಲುಪುತ್ತದೆ.
7 ಗಂಟೆ ಪ್ರಯಾಣ:
ಅಂದರೆ ಬೆಂಗಳೂರಿಂದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬೆಳಗ್ಗೆ ಹೊರಟರೆ, ಧಾರವಾಡದಿಂದ ಮಧ್ಯಾಹ್ನ ಬೆಂಗಳೂರಿಗೆ ಹೊರಡುತ್ತದೆ.
ಬೆಂಗಳೂರು-ಧಾರವಾಡ, ಧಾರವಾಡ-ಬೆಂಗಳೂರು ನಡುವೆ ವಂದೇ ಭಾರತ್ ಓಡಾಟದ ಅವಧಿ 6 ಗಂಟೆ 55 ನಿಮಿಷ.
ಏಕ್ಸ್ಪ್ರೆಸ್-ವಂದೇಭಾರತ್ಗೆ ಎಷ್ಟು ಅಂತರ..? (ಬೆಂಗಳೂರು-ಧಾರವಾಡ ಮಾರ್ಗದಲ್ಲಿ ಸಂಚರಿಸುವ ರೈಲುಗಳು)
ಅಂದಹಾಗೆ ಎಕ್ಸ್ಪ್ರೆಸ್ ರೈಲಿಗೂ ವಂದೇ ಭಾರತ್ ರೈಲಿನ ನಡುವಿನ ಅವಧಿಯ ಅಂತರ ಎಷ್ಟು..?
ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್ ರೈಲಿನ ಅವಧಿ 7 ಗಂಟೆ 16 ನಿಮಿಷ.
ಬೆಂಗಳೂರು ಮತ್ತು ಬೆಳಗಾವಿ ನಡುವಿ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲಿನ ಅವಧಿ 7 ಗಂಟೆ 16 ನಿಮಿಷ.
ಯಶವಂತಪುರ-ಹಜ್ರಾತ್ ನಿಜಾಮುದ್ದೀನ್ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ಅವಧಿ 7 ಗಂಟೆ 46 ನಿಮಿಷ.
ಯಶವಂತಪುರ-ವಾಸ್ಕೋಡಗಾಮ ರೈಲಿನ ಅವಧಿ 7 ಗಂಟೆ 48 ನಿಮಿಷ.
ಮೈಸೂರು-ಅಜ್ಮೇರ್ ಎಕ್ಸ್ಪ್ರೆಸ್ ರೈಲಿನ ಅವಧಿ 7 ಗಂಟೆ 36 ನಿಮಿಷ.
ಮೂರರಷ್ಟೇ ನಿಲುಗಡೆ:
ಎಕ್ಸ್ಪ್ರೆಸ್ ರೈಲಿಗಿಂತ ಕೇವಲ 30-45 ನಿಮಿಷ ಮುಂಚೆಯಷ್ಟೇ ಪ್ರಯಾಣಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ನಿಲುಗಡೆ ಮೂರು ಕಡೆಯಷ್ಟೇ.
ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ ಮತ್ತು ಧಾರವಾಡ. ಅಂದರೆ ಬೆಂಗಳೂರಿನಿಂದ ದಾವಣಗೆರೆವರೆಗೂ ಎಲ್ಲೂ ಕೂಡಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ನಿಲುಗಡೆ ಇಲ್ಲ. ಹೀಗಾಗಿ ಈ ರೈಲು ಜನಸಾಮಾನ್ಯರಿಗೆ ಅಷ್ಟೊಂದು ಲಾಭ ಆಗುವುದು ಅಷ್ಟರಲ್ಲೇ ಇದೆ.
ಉದಾಹರಣೆಗೆ ಬೆಂಗಳೂರು-ಮೈಸೂರು ನಡುವಿನ ವಂದೇ ಭಾರತ್ ರೈಲಿಗೆ ಮಧ್ಯದಲ್ಲಿ ಎಲ್ಲೂ ನಿಲುಗಡೆಯೇ ಇಲ್ಲ.
ADVERTISEMENT
ADVERTISEMENT