ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಅವರು ಬಿಡಿಎ ಕಾಮಗಾರಿಯಲ್ಲಿ 17 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಮತ್ತು ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್ ಮರಡಿ ಅವರ ಖಾತೆಗೆ 7.4 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ವರದಿ ಮಾಡಿದ್ದ ಕನ್ನಡದ ಸುದ್ದಿ ವಾಹಿನಿ ಪವರ್ ಟಿವಿಯ ಪ್ರಸಾರಕ್ಕೆ ರಾಜ್ಯ ಸರ್ಕಾರ ಅಡ್ಡಿಪಡಿಸಿದೆ.
ಪವರ್ ಟಿವಿ ಮಾಲೀಕ ರಾಕೇಶ್ ಶೆಟ್ಟಿ ವಿರುದ್ಧದ ವಂಚನೆ ಪ್ರಕರಣ ಸಂಬಂಧ ನಿನ್ನೆ ರಾತ್ರಿ ಪೊಲೀಸರು ಪವರ್ ಟಿವಿ ಕಚೇರಿಯಲ್ಲಿ ಕೋರ್ಟ್ ಆದೇಶದೊಂದಿಗೆ ಶೋಧ ಕೈಗೊಂಡಿದ್ದರು. ಈ ವೇಳೆ ಸಿಸಿಬಿ ಪೊಲೀಸರು ಟಿವಿ ಕಚೇರಿಯಲ್ಲಿದ್ದ ಉಪಕರಣಗಳನ್ನು ವಶಕ್ಕೆ ಪಡೆದಿದ್ದು, ಆ ಮೂಲಕ ಚಾನೆಲ್ ತನ್ನ ಪ್ರಸಾರವನ್ನು ಸ್ಥಗಿತಗೊಳಿಸಿದೆ ಎಂದು ಚಾನೆಲ್ ಹೇಳಿದೆ.
ಇತ್ತ ರಾಜ್ಯ ಸರ್ಕಾರದ ಕ್ರಮವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದು, ಮಗನ ಭ್ರಷ್ಟಾಚಾರದ ವರದಿ ಮಾಡಿದ್ದ ಕಾರಣಕ್ಕೆ ಚಾನೆಲ್ ಬಂದ್ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.
ತನ್ನ ಮಗನ ಭ್ರಷ್ಟಾಚಾರದ ವರದಿ ಪ್ರಸಾರ ಮಾಡಿದ ಕಾರಣಕ್ಕೆ @CMofKarnataka ಅವರು ಅಧಿಕಾರ ದುರುಪಯೋಗದ ಮೂಲಕ@powertvnews ಚಾನೆಲನ್ನೇ ಬಂದ್ ಮಾಡಲು ಹೊರಟಿರುವುದು ಖಂಡನೀಯ.
ಮಾಧ್ಯಮ ದಮನದ ಅತಿರೇಕದ ಈ ಕ್ರಮದಿಂದಾಗಿ ಟಿವಿ ಚಾನೆಲ್ನ ಆರೋಪವನ್ನು
ಜನತೆ ನಂಬುವಂತಾಗಿದೆ.ಸಂಶಯ ನಿವಾರಣೆಗೆ ತನಿಖೆಯೊಂದೇ ದಾರಿ.
— Siddaramaiah (@siddaramaiah) September 29, 2020