Saturday, May 24, 2025
Every Minute News
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
Every Minute News
No Result
View All Result
ADVERTISEMENT
Home Health

ಜೀರಿಗೆ ನೀರು ಕುಡಿಯುವುದರಿಂದ ಏನೆಲ್ಲಾ ಉಪಯೋಗವಿದೆ ಗೊತ್ತೇ?

by
20th October 2022
in Health
0
ಜೀರಿಗೆ ನೀರು ಕುಡಿಯುವುದರಿಂದ ಏನೆಲ್ಲಾ ಉಪಯೋಗವಿದೆ ಗೊತ್ತೇ?
0
SHARES
0
VIEWS
Share on FacebookShare on Twitter

ಜೀರಿಗೆಯನ್ನು ಹಾಗೇ ಸೇವಿಸುವುದಕ್ಕಿಂತ ಜೀರಿಗೆ ನೀರು ಮಾಡಿ ಕುಡಿಯುವುದರ ಮೂಲಕ ಹೆಚ್ಚಿನ ಲಾಭವಿದೆ. ರಾತ್ರಿ ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ ಹಾಕಿ ನೆನೆಸಿಡಿ. ಬಳಿಕ ಬೆಳಿಗ್ಗೆ ಆ ನೀರನ್ನು ಸೇವಿಸುವರಿಂದ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆಗಳನ್ನು ಕಂಡುಕೊಳ್ಳಬಹುದಾಗಿದೆ.

ಅದೆಷ್ಟೋ ವರ್ಷಗಳ ಹಿಂದಿನಿಂದಲೂ ಸಹ ಇದನ್ನು ಔಷಧಿಯಾಗಿ ಬಳಸುತ್ತಿದ್ದಾರೆ. ಜೀರಿಗೆಯಲ್ಲಿನ ಪೌಷ್ಟಿಕಾಂಶಗಳಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಪ್ರತಿದಿನ ಒಂದು ಲೋಟ ಜೀರಿಗೆ ನೀರು ಕುಡಿಯುವದರಿಂದ ಹೃದಯದ ಆರೋಗ್ಯ, ಚರ್ಮ ಹಾಗೂ ತಲೆಕೂದಲು ಬೆಳವಣಿಗೆಗೆ ಸಹಾಯಕವಾಗುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಜೀರಿಗೆಯಲ್ಲಿ ಪೊಟ್ಯಾಷಿಯಂ ಮತ್ತು ಕಬ್ಬಿಣ ಅಂಶಗಳಿಂದ ಸಮೃದ್ಧವಾಗಿದೆ. ಜತೆಗೆ ಉತ್ಕರ್ಷಣ ನಿರೋಧಕ ಶಕ್ತಿಗಳನ್ನು ಹೊಂದಿದೆ. ನಮ್ಮ ದೇಹದಲ್ಲಿರುವ ಬೇಡದ ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸುತ್ತದೆ. ಮೆಗ್ನೀಶಿಯಂ, ಕ್ಯಾಲ್ಸಿಯಂ ಮತ್ತು ವಿಟಮಿನ್​ ಎ, ಬಿ ಮತ್ತು ಸಿ ಇದ್ದು, ಸೋಂಕುಗಳ ವಿರುದ್ಧ ಹೋರಾಡಲು ಸಹಾಯಕವಾಗಿದೆ.

ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆ ಜೀರಿಗೆ ನೀರು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಕಾರ್ಬೋಹೈಡ್ರೇಟ್​ಗಳು, ಗ್ಲುಕೋಸ್​ ಮತ್ತು ಕೊಬ್ಬನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ. ಪಿತ್ತಜನಕಾಂಗದಲ್ಲಿ ಪಿತ್ತರಸ ಆಮ್ಲಗಳ ಉತ್ಪಾದನೆ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಇದು ಕರುಳಿನ ಚಲನೆಯನ್ನು ಸುಧಾರಿಸುತ್ತದೆ. ಅಜೀರ್ಣವನ್ನು ತಡೆಗಟ್ಟಲು ಸಹಾಯಕವಾಗಿದೆ.

ಮಹಿಳೆಯರ ಆರೋಗ್ಯಕ್ಕೆ ಒಳ್ಳೆಯದು ಜೀರಿಗೆ ನೀರು ಕುಡಿಯುವುದರಿಂದ ಹೊಟ್ಟೆ ಶುದ್ಧಗೊಳ್ಳುತ್ತದೆ. ಮುಟ್ಟಿನ ಚಕ್ರದ ಸಮಸ್ಯೆ ಕಾಡುತ್ತಿರುವವರ ಆರೋಗ್ಯವನ್ನು ಸುಧಾರಿಸುತ್ತದೆ. ಹಾಲುಣಿಸುವ ಮಹಿಳೆಯರಿಗೆ ಸ್ತನದಲ್ಲಿ ಹಾಲು ಉತ್ಪಾದನೆಗೊಳ್ಳಲು ಸಹಾಯಕವಾಗಿದೆ. ಜತೆಗೆ ಮಗುವಿಗೆ ಬೇಕಾದ ಪೋಷಕಾಂಶವನ್ನು ನೀಡುತ್ತದೆ.

ADVERTISEMENT
ADVERTISEMENT

ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು ಜೀರಿಗೆ ನೀರಿನಲ್ಲಿ ಪೊಟ್ಯಾಷಿಯಂ, ಮ್ಯಾಂಗನೀಸ್​ ಮತ್ತು ಸೆಲೆನಿಯಮ್​ ಸಮೃದ್ಧವಾಗಿರುತ್ತದೆ. ಇದು ಚರ್ಮದ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಿದೆ. ವಿಟಮಿನ್​ ಎ ಪೌಷ್ಟಿಕ ಅಂಶವನ್ನು ಹೊಂದಿರುವದರಿಂದ ಹಾಗೂ ಉತ್ಕರ್ಷಣ ನಿರೋಧಕ ಶಕ್ತಿಯಿಂದ ಸಮೃದ್ಧವಾಗಿರುವುದರಿಂದ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಬಹುದಾಗಿದೆ. ಹಾಗೂ ಮುಖದಲ್ಲಿನ ಮೊಡವೆ ಸಮಸ್ಯೆ ಯುವತಿಯರಿಗೆ ಹೆಚ್ಚು ಕಾಡುತ್ತದೆ. ಜೀರಿಗೆಯಲ್ಲಿರುವ ಆ್ಯಂಟಿಬ್ಯಾಕ್ಟೀರಿಯಾ ಗುಣಲಕ್ಷಣಗಳು ಮೊಡವೆಗಳು ಏಳಲು ಕಾರಣವಾಗುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಜೀರಿಗೆ ನೀರು ಕುಡಿಯುವುದರಿಂದ ನೆತ್ತಿಯ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಇದು ಪ್ರೋಟೀನ್​ ಮತ್ತು ಕಾರ್ಬೋಹೈಡ್ರೇಟ್​ಗಳನ್ನು ಹೊಂದಿರುತ್ತದೆ. ಇದು ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜತೆಗೆ ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಹೃದಯ ಆರೋಗ್ಯವನ್ನು ಸುಧಾರಿಸುತ್ತದೆ ಹೃದಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಜೀರಿಗೆ ನೀರು ತುಂಬಾ ಉಪಯುಕ್ತಕಾರಿ. ಜೀರಿಗೆ ನೀರು ಸೇವನೆಯಿಂದ ಹೃದಯ ಸ್ನಾಯುಗಳು ಬಲಗೊಳ್ಳುತ್ತವೆ. ಕೊಲೆಸ್ಟ್ರಾಲ್​ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೃದಯಾಘಾತ ಮತ್ತು ರಕ್ತದ ಒತ್ತಡದಂತಹ ಸಮಸ್ಯೆಗಳಿಂದ ಉಂಟಾಗುವ ಅಪಾಯವನ್ನು ತಡೆಯಲು ಸಹಾಯಕವಾಗಿದೆ.

ಇವಿಷ್ಟೇ ಅಲ್ಲದೇ ಮಧುಮೇಹ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಜೀರಿಗೆ ನೀರು ಸಹಾಯ ಮಾಡುತ್ತದೆ. ಮನೆಯಲ್ಲಿ ಪ್ರತಿನಿತ್ಯ ಬಳಸುವ ಅದೆಷ್ಟೋ ಆಹಾರ ಪದಾರ್ಥಗಳಿಂದ ಪ್ರಯೋಜಗಳಿವೆ. ಅವುಗಳ ಬಳಕೆ ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ ಹೀಗಿರುವಾಗ ಅವುಗಳನ್ನು ನಮ್ಮ ಜೀವನದಲ್ಲಿ ಪ್ರತಿನಿತ್ಯ ಬಳಸಿಕೊಳ್ಳುವುದು ಮುಖ್ಯವಾಗಿದೆ.

  1. Daymand Satta
  2. Diamond Exchange 9
  3. Betln Exchange
  4. Daimand Satta Com
  5. Satsport Exchange
ADVERTISEMENT
Previous Post

SSLC ವಿದ್ಯಾರ್ಥಿಗಳಿಗೆ ಬಹುಮುಖ್ಯ ‌ಮಾಹಿತಿ; ಮಹತ್ವದ ಸುತ್ತೋಲೆ ಹೊರಡಿಸಿದ ಪರೀಕ್ಷಾ ಮಂಡಳಿ

Next Post

ಭಾನುವಾರ ಭಾರತ-ಪಾಕಿಸ್ತಾನ ನಡುವೆ T-20 ವಿಶ್ವಕಪ್​ ಪಂದ್ಯ – ಜಾಹೀರಾತು ದರ ಎಷ್ಟಿದೆ ಗೊತ್ತಾ..?

Related Posts

ಮಂಡ್ಯ: ಮದ್ದೂರಿನ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್
Health

ಇಂದು ರಾಜ್ಯದಲ್ಲಿ 103 ಮಂದಿಗೆ ಕೋವಿಡ್ ಪಾಸಿಟಿವ್‌ ದೃಢ…!

by PratikshanaNews
27th January 2024
Health Tips: ನೆನೆಸಿಟ್ಟ ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನವಿದೆ…
Health

Health Tips: ನೆನೆಸಿಟ್ಟ ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನವಿದೆ…

by PratikshanaNews
29th December 2023
Yoga Tips: ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ ಈ ಮುದ್ರೆ; ತಪ್ಪದೇ ಅನುಸರಿಸಿ
Health

Yoga Tips: ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ ಈ ಮುದ್ರೆ; ತಪ್ಪದೇ ಅನುಸರಿಸಿ

by PratikshanaNews
29th December 2023
Yoga Tips: ಈ ಯೋಗಾಭ್ಯಾಸಗಳಿಂದ ಸುಲಭವಾಗಿ ಶುಗರ್ ಕಂಟ್ರೋಲ್ ಮಾಡಿಕೊಳ್ಳಬಹುದು!
Health

Yoga Tips: ಈ ಯೋಗಾಭ್ಯಾಸಗಳಿಂದ ಸುಲಭವಾಗಿ ಶುಗರ್ ಕಂಟ್ರೋಲ್ ಮಾಡಿಕೊಳ್ಳಬಹುದು!

by PratikshanaNews
28th December 2023
Health Tips: ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿಯೋದರಿಂದ ಏನೆಲ್ಲಾ ಪ್ರಯೋಜನಗಳಿವೆ ?
Health

Health Tips: ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿಯೋದರಿಂದ ಏನೆಲ್ಲಾ ಪ್ರಯೋಜನಗಳಿವೆ ?

by PratikshanaNews
26th December 2023
Yoga Tips: ಬೆನ್ನು ನೋವು ಹತ್ತಿರ ಸುಳಿಯಬಾರದೆಂದರೆ ಈ ಯೋಗಾಸನಗಳನ್ನು ಮಾಡಿ..!
Health

Yoga Tips: ಬೆನ್ನು ನೋವು ಹತ್ತಿರ ಸುಳಿಯಬಾರದೆಂದರೆ ಈ ಯೋಗಾಸನಗಳನ್ನು ಮಾಡಿ..!

by PratikshanaNews
26th December 2023
Health Tips: ನಿದ್ರೆ ಸರಿಯಾಗಿ ಬರ್ತಿಲ್ವ ಹಾಗಾದ್ರೆ ಈ ಮನೆಮದ್ದುಗಳನ್ನು ಒಮ್ಮೆ ಟ್ರೈ ಮಾಡಿ…!
Health

Health Tips: ನಿದ್ರೆ ಸರಿಯಾಗಿ ಬರ್ತಿಲ್ವ ಹಾಗಾದ್ರೆ ಈ ಮನೆಮದ್ದುಗಳನ್ನು ಒಮ್ಮೆ ಟ್ರೈ ಮಾಡಿ…!

by PratikshanaNews
23rd December 2023
Skin Care Tips: ತ್ವಚೆಯನ್ನು ಕಾಂತಿಯುತವಾಗಿಸಲು ಹಸಿ ಹಾಲಿನ ಫೇಸ್ ಪ್ಯಾಕ್ ಹೀಗೆ ಮಾಡಿ…!
Health

Skin Care Tips: ತ್ವಚೆಯನ್ನು ಕಾಂತಿಯುತವಾಗಿಸಲು ಹಸಿ ಹಾಲಿನ ಫೇಸ್ ಪ್ಯಾಕ್ ಹೀಗೆ ಮಾಡಿ…!

by PratikshanaNews
23rd December 2023
Next Post
India Pakistan Match

ಭಾನುವಾರ ಭಾರತ-ಪಾಕಿಸ್ತಾನ ನಡುವೆ T-20 ವಿಶ್ವಕಪ್​ ಪಂದ್ಯ - ಜಾಹೀರಾತು ದರ ಎಷ್ಟಿದೆ ಗೊತ್ತಾ..?

Leave a Reply Cancel reply

Your email address will not be published. Required fields are marked *

ADVERTISEMENT

Trend News

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ

by PratikshanaNews
19th February 2025
0
ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ
News

ಮಹಾಕುಂಭದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿರುವ ನೀರು ಸ್ನಾನ ಮಾಡುವುದಕ್ಕೂ ಯೋಗ್ಯವಲ್ಲ ಎಂದು ಕೇಂದ್ರ ಸರ್ಕಾರದ ಆಧೀನದಲ್ಲಿ ಬರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿದೆ....

Read more

ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ

by PratikshanaNews
18th February 2025
0
ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ
News

ಮುಸಲ್ಮಾನರ ಉಪವಾಸ ತಿಂಗಳು ಆಗಿರುವ ರಂಜಾನ್‌ನಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ರಾಜ್ಯ ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರಿಗೆ ತೆಲಂಗಾಣದಲ್ಲಿರುವ ಕಾಂಗ್ರೆಸ್‌ ಸರ್ಕಾರ ಮತ್ತು ಆಂಧ್ರಪ್ರದೇಶದಲ್ಲಿರುವ ತೆಲುಗು...

Read more

ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌

by PratikshanaNews
3rd January 2025
0
ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌
News

ಆಸ್ಟ್ರೇಲಿಯಾ ವಿರುದ್ಧದ 5ನೇ ಮತ್ತು ಕಡೆಯ ಟೆಸ್ಟ್‌ನ ಮೊದಲ ದಿನವೇ ಭಾರತ ಆಲೌಟ್‌ ಆಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 72.2 ಓವರ್‌ಗಳಲ್ಲಿ 185 ರನ್‌ಗೆ ಟೀಂ ಇಂಡಿಯಾದ ಎಲ್ಲಾ...

Read more

ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!

by PratikshanaNews
3rd January 2025
0
ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!
News

ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಪತ್ನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ದುಬಾರಿ ಮೊತ್ತದ ಉಡುಗೊರೆಯನ್ನು ನೀಡಿದ್ದಾರೆ. ಜೋ ಬಿಡೆನ್‌ ಪತ್ನಿ ಜಿಲ್‌ ಬಿಡೆನ್‌ಗೆ ಪ್ರಧಾನಿ...

Read more
ADVERTISEMENT
ADVERTISEMENT
Every Minute News

© 2023 Pratikshana News

Navigate Site

  • News
  • Cinema
  • Sports
  • Health
  • Lifestyle
  • Gallery
  • Special

Follow Us

No Result
View All Result
  • News
  • Cinema
  • Sports
  • Health
  • Lifestyle
  • Gallery
  • Special

© 2023 Pratikshana News

error: Content is protected !!